|
*ಶೋಭಾ
ಭಾರತೀಯ ಸಂಸ್ಕೃತಿಯ ಪರಂಪರೆಯ
ಬಹುತೇಕ ಎಲ್ಲ ಹಬ್ಬಗಳೂ ಕರ್ನಾಟಕದಲ್ಲಿ ಆಚರಣೆಯಲ್ಲಿವೆ.
ಭಾರತದಲ್ಲಿ ಆಚರಿಸಲಾಗುವ ಬಹುತೇಕ ಹಬ್ಬಗಳು
ವಿಜಯೋತ್ಸವದ
ಹಾಗೂ ಸಂಭ್ರಮದ ಸಂಕೇತವೇ ಈಗಿವೆ. ಈ ಪೈಕಿ ನವರಾತ್ರಿ ಅಥವಾ ದಸರ
ಸಂಪೂರ್ಣವಾಗಿ ವಿಜಯೋತ್ಸವದ ದಿಬ್ಬಣ.
ಆಶ್ವಯುಜ ಶುದ್ಧ ಪಾಡ್ಯದಿಂದ
ದಶಮಿಯವರೆಗೆ ಹತ್ತು ದಿನಗಳ ಕಾಲ
ದೇವಾನುದೇವತೆಗಳು ದಾನವರ ವಿರುದ್ಧ ಸಾಧಿಸಿದ ವಿಜಯದ ಸಂಭ್ರಮವನ್ನು ಸಡಗರದಿಂದ
ಆಚರಿಸಲಾಗುತ್ತದೆ. ಶ್ರೀರಾಮಚಂದ್ರ ರಾವಣನನ್ನು ಕೊಂದದ್ದು, ದುರ್ಗೆ,
ಚಾಮುಂಡೇಶ್ವರಿ ರಕ್ತಬೀಜ, ಮಹಿಷಾಸುರನನ್ನು ಸಂಹರಿಸಿದ್ದು ನವರಾತ್ರಿಯ ಹಾಗೂ ದಸರೆಯ
ಸಂಭ್ರಮಕ್ಕೆ ಮೂಲ ಕಾರಣವಾಗಿದೆ.
ದಸರೆ ನಮ್ಮ ನಾಡಹಬ್ಬ. ದಸರೆಗೆ
ವಾಸ್ತವವಾಗಿ ಖ್ಯಾತಿ ಬಂದಿದ್ದೇ ಮೈಸೂರಿನಿಂದ. ಮೈಸೂರು ಸಂಪ್ರದಾಯದ ದಸರೆಯ
ವೈಭವವನ್ನು ದೇಶದ ಮತ್ತೆಲ್ಲೂ ಕಾಣಲು ಸಾಧ್ಯವೇ ಇಲ್ಲ.
ಶರದೃತುವಿನ ಮೊದಲ ದೊಡ್ಡ
ಹಬ್ಬವೇ ದಸರೆ. ದಸರೆಗೆ ದಶಹರ,
ದಶರಾತ್ರಿ, ನವರಾತ್ರಿ,
ಶರನ್ನವರಾತ್ರಿ ಎಂಬ ಹೆಸರೂ ಉಂಟು. ಮೈಸೂರು ಪ್ರಾಂತದಲ್ಲಿ ರಾಜಾ
ಪ್ರತ್ಯಕ್ಷ ದೇವತಾ ಎಂದು ತಿಳಿದಿದ್ದ ಕಾರಣ,
ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಮನೆಯಲ್ಲಿ ಕೂರಿಸಿ
ಪೂಜಿಸುತ್ತಿದ್ದುದು ವಾಡಿಕೆ. ನವವಿವಾಹಿತರಿಗೆ ವರಪೂಜೆಯ ಕಾಲದಲ್ಲೇ ಪಟ್ಟದ
ಬೊಂಬೆಗಳನ್ನು ನೀಡುವ ಸಂಪ್ರದಾಯವೂ ಕರ್ನಾಟಕದಲ್ಲಿದೆ.
ಈ ಬೊಂಬೆಗಳನ್ನು ಹಾಗೂ
ಇದರೊಂದಿಗೆ ಹಲವು ಬಗೆಯ ಬೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ
ಕೂರಿಸಿ,
ಪ್ರತಿ ಸಂಜೆ ಆರತಿ ಮಾಡಿ ಬೊಂಬೆ ಬಾಗಿನ ನೀಡುವುದು
ಅನೂಚಾನವಾಗಿ ನಡೆದು ಬಂದ ಪದ್ಧತಿ. ಹೆಣ್ಣು
ಮಕ್ಕಳಿರುವ ಮನೆಯಲ್ಲಂತೂ ದಸರೆ-ನವರಾತ್ರಿ ಬೊಂಬೆಹಬ್ಬ ಎಂದೇ ಖ್ಯಾತವಾಗಿದೆ.
ಸಾಮಾನ್ಯವಾಗಿ ನವರಾತ್ರಿಯಲ್ಲಿ
ಪಾಡ್ಯದ ದಿನದಿಂದ ಬೊಂಬೆಗಳನ್ನು ಪೂಜಿಸಲಾಗುತ್ತದೆ.
ಆದರೆ, ಮಹಾಲಯ ಅಮಾವಾಸ್ಯೆಯ ರಾತ್ರಿಯೇ ಮನೆಗಳಲ್ಲಿ ಬೊಂಬೆ ಕೂರಿಸುವ ಕಸರತ್ತು
ಆರಂಭವಾಗುತ್ತದೆ. ಕೆಲವರ ಮನೆಗಳಲ್ಲಿ ಒಂದು ತಿಂಗಳ ಮೊದಲೇ ಬೊಂಬೆ ಕೂರಿಸಲು
ಸಿದ್ಧತೆಗಳು ಆರಂಭವಾಗಿರುತ್ತವೆ.
ಹೆಣ್ಣು ಮಕ್ಕಳಿಲ್ಲದ ಕೆಲವರು
ಶಾರದೆಯ ಹಬ್ಬದಿಂದ ತಮ್ಮ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ. ಕಾಳಿಕಾ ಪುರಾಣದಲ್ಲಿ
ಹೇಳಿರುವಂತೆ ಮೈಸೂರು ಸೀಮೆಯಲ್ಲಿ ಹಬ್ಬದ ಆಚರಣೆ. ಪಾಡ್ಯದಂದು ಮನೆಯಲ್ಲಿಬೊಂಬೆ
ಕೂರಿಸಿ,
ಅಂದಿನಿಂದ ತಾಯಿ ದುರ್ಗೆಯನ್ನು ನಾನಾ ವಿಧದಲ್ಲಿ ಪೂಜಿಸುತ್ತಾರೆ. ಪಂಚಮಿಯ ದಿನ
ಲಲಿತಾ ಪಂಚಮಿ ಎಂದು ಪೂಜಿಸಿದರೆ, ಸಪ್ತಮಿಯದಿನ
ವಿದ್ಯಾದಿದೇವತೆ ಸರಸ್ವತಿಯ ಪೂಜೆ ನಡೆಯುತ್ತದೆ. ಅಷ್ಟಮಿಯಂದು ದುರ್ಗೆಯನ್ನು
ಪೂಜಿಸುತ್ತಾರೆ. ನವಮಿಯನ್ನು ಆಯುಧಪೂಜೆ ಎಂದು ಆಚರಿಸಲಾಗುತ್ತದ. ಅಂದು ಎಲ್ಲರ
ಮನೆಯಲ್ಲೂ ತಮ್ಮ ವಾಹನಗಳನ್ನು ತೊಳೆದು ಸಿಂಗರಿಸಿ ಪೂಜಿಸುವುದು ವಾಡಿಕೆ. ದಶಮಿಯ
ದಿನ ವಿಜಯೋತ್ಸವದ ಸಂಕೇತವಾಗಿದ್ದು, ಅಂದು ಯಾವುದೇ ಶುಭ
ಕಾರ್ಯ ಮಾಡಿದರೂ ವಿಜಯ ಕಟ್ಟಿಟ್ಟಬುತ್ತಿ ಎಂಬ ನಂಬಿಕೆ ಇದೆ. ಅಂದು ಶಮೀವೃಕ್ಷ
ಪೂಜಿಸಿ ಇದರ ಎಲೆಗಳನ್ನು ದೇವರಿಗೆ ಅರ್ಪಿಸಿ ನಂತರ ಪ್ರಸಾದವಾಗಿ
ಸ್ವೀಕರಿಸುತ್ತಾರೆ. ಆಪ್ತೇಷ್ಟರಿಗೆ ಶಮೀ ಹಂಚಿದರೆ ಪುಣ್ಯದಾಯಕ ಎನ್ನುತ್ತಾರೆ
ಹಿರಿಯರು.
ಶಮೀ ಶಮಯತೇ ಪಾಪಮ್ ಶಮೀ
ಶತ್ರುವಿನಾಶಿನೀ|
ಅರ್ಜುನಸ್ಯ ಧನುರ್ಧಾರೀ
ರಾಮಸ್ಯ ಪ್ರಿಯದರ್ಶಿನೀ||
ಎಂಬ ಶ್ಲೋಕವೇ ಇದೆ. ಅಂದರೆ
ಶಮಿ ವೃಕ್ಷ ಎಲ್ಲ ಪಾಪವನ್ನೂ ಕಳೆಯುತ್ತದೆ. ಶತ್ರುಗಳನ್ನು ನಿರ್ನಾಮ ಮಾಡುತ್ತದೆ. ಈ
ಶಮಿ ಅರ್ಜುನನ ಎಲ್ಲ ಶಸ್ತ್ರಗಳನ್ನೂ ಹೊತ್ತಿದ್ದಲ್ಲದೆ. ಶ್ರೀರಾಮನಿಗೆ ಪ್ರಿಯರ
ದರ್ಶನವನ್ನೂ ಮಾಡಿಸಿತ್ತು ಎಂಬುದು ಈ ಶ್ಲೋಕದ ಅರ್ಥವಾಗಿದೆ.
ಶ್ರೀರಾಮಚಂದ್ರ ಅಯೋಧ್ಯೆಯ
ಪುರಪ್ರವೇಶಕ್ಕೆ ಮುನ್ನ ಶಮೀವೃಕ್ಷವನ್ನು ಪೂಜಿಸಿದ್ದನಂತೆ. ಪಾಂಡವರು ಅeತವಾಸದಿಂದ
ಹೊರಬಂದಿದ್ದು ವಿಜಯ ದಶಮಿಯದಿನವೇ.
ಒಡೆಯರ ಪದ್ಧತಿ:
ಇಂದೂ ಕೂಡ ಶ್ರೀಕಂಠದತ್ತ
ನರಸಿಂಹರಾಜ ಒಡೆಯರು,
ಪಾಡ್ಯದ ದಿನ ನಸುಕಿನಲ್ಲೇ ಎದ್ದು ಮಂಗಳ ಸ್ನಾನ ಮಾಡಿ,
ಪತ್ನಿಯೊಡಗೂಡಿ ತಾಯಿ ಚಾಮುಂಡೇಶ್ವರಿಯ ಪೂಜಿಸಿ,
ನವರಾತ್ರಿಯ ವ್ರತಕ್ಕಾಗಿ ಕಂಕಣ ತೊಡುತ್ತಾರೆ. ಮಹಾಗಣಪತಿ
ಪೂಜೆಯೊಂದಿಗೆ ಆರಂಭವಾಗುವ ಈ ವ್ರತದಲ್ಲಿ ಅಷ್ಟದಿಕ್ಪಾಲಕರನ್ನೂ
ಪೂಜಿಸಲಾಗುತ್ತದೆ.ಅರಮನೆಯಲ್ಲೂ ಬೊಂಬೆಗಳನ್ನು ಕೂರಿಸಲಾಗುತ್ತದೆ. ಖಾಸಗಿ
ದರ್ಬಾರ್ನಲ್ಲಿ ಮೈಸೂರು ಸಂಪ್ರದಾಯದ ಎಲ್ಲ ಆಚರಣೆಗಳನ್ನೂ ನಾವು ನೋಡಬಹುದಾಗಿದೆ.
ಇದೇ ಮಾದರಿಯ ಆಚರಣೆ ಮೈಸೂರು ಕಡೆಯವರ ಹಲವು ಮನೆಯಲ್ಲೂ ವಾಡಿಕೆಗೆ ಬಂದಿದೆ.
ಮನೆಯಲ್ಲಿ ಬೊಂಬೆ ಕೂರಿಸಿ, ೧೦ ದಿನಗಳ ಕಾಲ ದಸರೆ
ಉತ್ಸವ ಆಚರಿಸುವ ಮಂದಿ ಹತ್ತೂ ದಿನವೂ ಹಬ್ಬದಡಿಗೆ ಮಾಡಿ ಸಂಭ್ರಮಿಸುತ್ತಾರೆ. ಶಾರದೆ
ಹಬ್ಬದ ದಿನ ಮನೆಯಲ್ಲಿರುವ ಓಲೆಗರಿ, ಶಾಲಾ
ಪುಸ್ತಕಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟು, ಅದರ
ಮೇಲೊಂದು ಕಳಶವಿಟ್ಟು ಸೀರೆ ಉಡಿಸಿ ಪೂಜಿಸಲಾಗುತ್ತದೆ.
ದಶಮಿಯ ಆಚರಣೆಗೆ ಪುರಾಣಗಳ
ಉಲ್ಲೇಖವೂ ಇದೆ. ದೇವತೆಗಳು ರಾಕ್ಷಸರನ್ನು ಕೊಂದ ವಿಜಯೋತ್ಸವ ಆಚರಿಸಿದ ಸಂಕೇತವಾಗಿ
ಈ ಹಬ್ಬ ಆಚರಿಸಲಾಗುತ್ತದೆ. ದಾನವಶಕ್ತಿಯ ದಮನ ಮಾಡಲು ಶಕ್ತಿದೇವತೆಯಾದ
ಚಾಮುಂಡೇಶ್ವರಿಯು ೯ ದಿನಗಳ ಕಾಲ ಮುಕ್ಕೋಟಿ ದೇವಾನು ದೇವತೆಗಳ ಶಕ್ತಿಯನ್ನು ಧರಿಸಿ,
ಸಿಂಹವಾಹಿನಿಯಾಗಿ ಈ ನವರಾತ್ರಿಯ ಕಾಲದಲ್ಲೇ ಮಹಿಷನ ಕೊಂದಿದ್ದು
ಹೀಗಾಗಿ ಶಕ್ತಿದೇವತೆಯ ಆರಾಧನೆಗೂ ಈ ಹಬ್ಬದಲ್ಲಿ ವಿಶೇಷ ಮಹತ್ವ.
ಜೊತೆಗೆ ಲಂಕೆಯ ಮೇಲೆ
ದಂಡೆತ್ತಿ ಹೋದ ಶ್ರೀರಾಮ ರಾವಣನ ಸಂಹರಿಸಿ,
ವಿಜಯ ಸಾಸಿದ್ದೂ ದಶಮಿಯಂದೆ. ಹೀಗಾಗಿ ಈ ಆಶ್ವೀಜದ ಹತ್ತನೇ
ದಿನಕ್ಕೆ ವಿಜಯದಶಮಿ ಎಂದೂ ಕರೆಯುತ್ತಾರೆ. ಈ ಎಲ್ಲವೂ ಬೊಂಬೆಗಳ ಪ್ರದರ್ಶನದಲ್ಲೂ
ಪ್ರಕಟ. ಬೊಂಬೆ ಕೂರಿಸುವವರು, ಹನುಮದ್ ಸಮೇತನಾದ
ಶ್ರೀರಾಮಚಂದ್ರ, ಲಕ್ಷಣ,
ಸೀತೆಯರ ಬೊಂಬೆಗಳ ಜೊತೆ, ಚಾಮುಂಡೇಶ್ವರಿಯ ಬೊಂಬೆಯನ್ನೂ
ಇಟ್ಟು ಪೂಜಿಸುತ್ತಾರೆ.
ಯುದ್ಧ ಹಾಗೂ ವಿಜಯವೇ ಈ ಹಬ್ಬದ
ಸಡಗರ ಸಂಭ್ರಮಕ್ಕೆ ನಾಂದಿಯಾದ ಕಾರಣ ಬೊಂಬೆಗಳಲ್ಲಿ ಆನೆ,
ಕುದುರೆ, ಪದಾದಿಯೇ ಮೊದಲಾದ ಚದುರಂಗ
ಬಲವನ್ನು ಇಡುವುದೂ ಮೈಸೂರು ಕಡೆಯಲ್ಲಿ ವಾಡಿಕೆ. ಈ ಹಬ್ಬಗಳ ಸಾಲಿನಲ್ಲಿ
ಶಸ್ತ್ರವಾಹನಾದಿಗಳನ್ನು ಪೂಜಿಸಲೆಂದೇ ವಿಶೇಷ ಆಚರಣೆಯಿದೆ.
ಆಯುಧಪೂಜೆಯ ದಿನ
ಕರ್ನಾಟಕದಲ್ಲಿ ಬಹುತೇಕ ಎಲ್ಲರೂ ಮನೆಯಲ್ಲಿರುವ ವಾಹನಗಳನ್ನು ತೊಳೆದು,
ಪೂಜಿಸಿ, ಬಾಳೆಯ ಕಂದು,
ಮಾವಿನಸೊಪ್ಪು ಹಾಗೂ ಹೂವಿನಿಂದ ಅಲಂಕರಿಸುತ್ತಾರೆ.
ಯಂತ್ರ ಹಾಗೂ ಸ್ಪ್ಯಾನರ್ ಸಂಬಂ
ಕೆಲಸಗಳು ನಡೆಯುವ ಕಾರ್ಖಾನೆ,
ಅಂಗಡಿ, ಗ್ಯಾರೆಜ್ಗಳಲ್ಲಿ ಎಲ್ಲ
ಯಂತ್ರ, ಸಲಕರಣೆಗಳನ್ನೂ ತೊಳೆದು,
ಒರೆಸಿ, ಪೂಜಿಸುತ್ತಾರೆ.
ಮನೆಗಳಲ್ಲಿ ಚಾಕು, ಕತ್ತರಿ ಇತ್ಯಾದಿ ಆಯುದ್ಧಗಳ್ನು
ತೊಳೆದು ಬೊಂಬೆಗಳ ಪಕ್ಕದಲ್ಲೇ ಇಟ್ಟು ಪೂಜಿಸಲಾಗುತ್ತದೆ.
ರಾಮಾಯಣ ಮಹಾಭಾರತ ಕಾಲದಿಂದಲೂ
ಈ ಹಬ್ಬ ಆಚರಣೆಯಲ್ಲಿತ್ತು ಎಂದು ಪುರಾಣಗಳು ಹೇಳುತ್ತವೆ. ಅeತ
ವಾಸ ಕಾಲದಲ್ಲಿ ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನು ಬನ್ನಿ ಮರವನ್ನು ಪೂಜಿಸಿ
ಅದರಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ಪೂಜಿಸಿ, ಯುದ್ಧ
ಮಾಡಿ ವಿಜಯ ಸಾಸಿದ. ಹೀಗಾಗೆ ವಿಜಯ ದಶಮಿಯ ದಿನ ಬನ್ನಿ ಮರಕ್ಕೆ ಪೂಜಿಸುವ
ಮತ್ತುಬನ್ನಿ ಹಂಚುವ ಸಂಪ್ರದಾಯವೂ ಬೆಳೆದಿದೆ.
ದುರ್ಗಾಷ್ಟಮಿಯ ದಿನ ನಾಡದೇವಿ
ಚಾಮುಂಡೇಶ್ವರಿಯ ಪ್ರೀತ್ಯರ್ಥ ವಿಶೇಷ ಪೂಜೆ ನಡೆಯುತ್ತದೆ. ಶರನ್ನವರಾತ್ರಿಯ
ಒಂಬತ್ತೂ ದಿನ ದುರ್ಗೆಯ ಪೂಜೆ ನಡೆಯುತ್ತದೆ.
ವಿಜಯ ದಶಮಿ ಈ ಹಬ್ಬದ ಕೊನೆಯ
ದಿನ. ಅಂದು ಸೀಮೋಲ್ಲಂಘನೆ ಮಾಡಬೇಕು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹೀಗಾಗೆ
ಮೈಸೂರಿನಲ್ಲಿ ಜಂಬೂಸವಾರಿ ಆಚರಣೆಗೆ ಬಂದಿದೆ. ಅಂದು ಮೈಸೂರು ಮಹಾರಾಜರು ತಮ್ಮ
ಸೈನ್ಯ ಸಹಿತವಾಗಿ ಚಿನ್ನದಂಬಾರಿಯಲ್ಲಿ ಕುಳಿತು ಬನ್ನಿ ಮಂಟಪಕ್ಕೆ ಹೋಗುತ್ತಿದ್ದರು.
ಇಂದು ರಾಜರಿಲ್ಲ. ಆದರೂ ತಾಯಿ ಚಾಮುಂಡೇಶ್ವರಿಯನ್ನೇ ಅಂಬಾರಿಯಲ್ಲಿ ಕೂರಿಸಿ
ಜಂಬೂಸವಾರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ದಸರೆಯ ಸಂದೇಶ: ಸಾತ್ವಿಕ
ಶಕ್ತಿಗಳೆಲ್ಲವೂ ಒಗ್ಗೂಡಿ ದುಷ್ಟ ಶಕ್ತಿಯನ್ನು ದಮನ ಮಾಡಬಹುದೆಂಬುದನ್ನು ಈ ೧೦
ದಿನಗಳ ವ್ರತಾಚರಣೆ ಬಿಂಬಿಸುತ್ತದೆ. ನಾನು,
ನಮ್ಮದು ಎಂಬುದನ್ನು ಬಿಟ್ಟು ಅರಿಷಡ್ವರ್ಗಗಳನ್ನು ಗೆಲ್ಲುವ
ಮಾರ್ಗವನ್ನು ಈ ೧೦ ದಿನಗಳ ಆಚರಣೆ ಕಲಿಸುತ್ತದೆ.
|